ಸುಂಕದಕಟ್ಟೆ ಯಕ್ಷಗಾನ ತಿರುಗಾಟಕ್ಕೆಚಾಲನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 20 , 2014
|
ನವ೦ಬರ್ 20, 2014
|
ಸುಂಕದಕಟ್ಟೆ ಯಕ್ಷಗಾನ ತಿರುಗಾಟಕ್ಕೆಚಾಲನೆ
ಬಜಪೆ :
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಿಂದ ಪ್ರವರ್ತಿತ ಶ್ರೀ ಅಂಬಿಕಾ ಅನ್ನಪೂರ್ಣೆಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 40ನೇ ವರ್ಷದ ತಿರುಗಾಟಕ್ಕೆ ಬುಧವಾರ ಗೆಜ್ಜೆ ಮೂಹೂರ್ತದೊಂದಿಗೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.
ಬೆಳಗ್ಗೆ ದೇವಳದಲ್ಲಿ ಗಣಹೋಮ ನಡೆದು ಮೇಳದ ಸೇವೆಯಾಟದ ಪೂರ್ವಬಾವಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು. ಕುಡುಪು ಕೃಷ್ಣ ರಾಜ ತಂತ್ರಿ ಅವರ ನೇತತ್ವದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ಜರುಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮೇಳದ ಹಿಮ್ಮೇಳ ಮುಮ್ಮೇಳದ ಕಲಾವಿದರುಗಳಿಗೆ ಶುಭ ಹಾರೈಸಿದರು. ಮೇಳದ ಮ್ಯಾನೇಜರ್ ಜಗದೀಶ್, ಶಿವಣ್ಣ ಶೆಟ್ಟಿ ವಾಮಂಜೂರು, ಜಿಪಂ ಸದಸ್ಯೆ ಯಶವಂತಿ ಆಳ್ವ, ವಕೀಲರಾದ ವಿನೋಧರ ಪೂಜಾರಿ, ಗಣೇಶ ಪೆರ್ಲಗುರಿ, ಬಾಬು ಎನ್.ಶೆಟ್ಟಿ, ಸುಕುಮಾರ್ ಸಾಲ್ಯಾನ್, ಪ್ರಸಂಗಕರ್ತ ಶ್ರೀನಿವಾಸ್ ಸಾಲ್ಯಾನ್ ಉಪಸ್ಥಿತರಿದ್ದರು. ರಂಗ ಸ್ಥಳದಲ್ಲಿ ದೇವರ ಪೂಜೆ ನಡೆದ ಬಳಿಕ 'ಪಾಂಡವಾಶ್ವಮೇಧ' ಯಕ್ಷಗಾನ ಜರುಗಿತು.ಮುಂದಿನ 180 ದಿನಗಳ ಕಾಲ ಮೇಳವು, ನಾಡಿನೆಲ್ಲೆಡೆ ಯಕ್ಷಗಾನ ಪ್ರದರ್ಶನ ನೀಡಲಿದೆ.
ಕೃಪೆ :
http://www.vijaykarnataka.com
|
|
|